Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?
Udagi 2024: ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿಯೇ ಆಡಳಿತ ನಡೆಸುವ ಮುನ್ಸೂಚನೆಯನ್ನು ಹನುಮನಕೊಪ್ಪದ ಬೊಂಬೆ ಭವಿಷ್ಯವನ್ನು ನುಡಿದಿದೆ. ಮಳೆ-ಬೆಳೆ ಬಗ್ಗೆಯೂ ಬೊಂಬೆ ಭವಿಷ್ಯ ನುಡಿಯಲಾಗಿದೆ. ಹಾಗಾದರೆ ಹನುಮನಕೊಪ್ಪದ ಬೊಂಬೆ ನುಡಿದ ಅಚ್ಚರಿ ಭವಿಷ್ಯ ಏನು?
ಧಾರವಾಡ: ಯುಗಾದಿ ಹಬ್ಬದಂದು (Ugadi 2024) ವಿವಿಧ ಜಿಲ್ಲೆಗಳಲ್ಲಿ ವಿಭಿನ್ನ ರೀತಿಯ ಆಚರಣೆಗಳು ನಡೆಯುತ್ತವೆ. ಧಾರವಾಡದಲ್ಲಿ (Dharvada bombe bhavishya) ಬೊಂಬೆ ಭವಿಷ್ಯದ ಆಚರಣೆ ಮನೆ ಮಾತಾಗಿದೆ. ಇಲ್ಲಿ ನುಡಿಯಲಾಗುವ ಭವಿಷ್ಯದ ಬಗ್ಗೆ ಜನರಿಗೆ ವಿಶೇಷ ಆಸಕ್ತಿಯೂ ಇದೆ. ಅದರಂತೆ ವರ್ಷವಿಡೀ ಭವಿಷ್ಯದ ಲೆಕ್ಕಾಚಾರ ಹಾಕಿಕೊಳ್ಳಲಾಗುತ್ತದೆ. ಈ ಬಾರಿ ಕೇಂದ್ರ ಮತ್ತು ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಧಾರವಾಡದ ಗೊಂಬೆ ಭವಿಷ್ಯ ನುಡಿದಿದೆ. ಈ ಪ್ರಕಾರ ಕೇಂದ್ರದಲ್ಲಿ ನರೇಂದ್ರ ಮೋದಿ (Narendhra modi) ಅವರೇ ಈ ಬಾರಿಯೂ ದೇಶದ ಪ್ರಧಾನಮಂತ್ರಿ (Prime minster) ಆಗಲಿದ್ದಾರೆ ಎಂದು ಬೊಂಬೆ ಭವಿಷ್ಯ ಹೇಳಿದೆ.
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡ ಹನುಮನಕೊಪ್ಪದಲ್ಲಿ ಈ ಬೊಂಬೆ ಭವಿಷ್ಯ ನಡೆದುಕೊಂಡು ಬಂದಿದೆ. ಕಳೆದ ವರ್ಷ ಗೊಂಬೆ ಭವಿಷ್ಯದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮುನ್ಸೂಚನೆ ನೀಡಿತ್ತು. ಅದರಂತೆ ರಾಜ್ಯದ ಜನರು ಬಿಜೆಪಿ ಬದಲು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಸಿಂಹಾಸನ ಏರಿದರು.

Comments
Post a Comment